ಅನ್ನಪ್ರಸಾದ ಸಿದ್ಧಪಡಿಸುವ ಅಡುಗೆ ತಯಾರಿ ಕೊಠಡಿ, ಕಚ್ಛಾ ಹಾಗೂ ಸಿದ್ಧ ಆಹಾರ ಶೇಖರಣೆ ಕೊಠಡಿ, ಹಾಗೂ ಭಕ್ತರಿಗೆ ವಿತರಿಸುವ ಲಡ್ಡು ಪಂಚಕಜ್ಜಾಯ, ಇತ್ಯಾದಿ ತಯಾರಿ ಹಾಗೂ ವಿತರಣೆ ಶೇಖರಣ ಕೊಠಡಿಗಳಲ್ಲಿ ಸುರಕ್ಷತೆಯ ಕ್ರಮಗಳನ್ನು ಜಾರಿಗೆ ತರಲು ಅದು ನಿರ್ಧರಿಸಿದೆ. ಈ ಸ್ಥಳಗಳಿಗೆ ಸಾರ್ವಜನಿಕರ ಪ್ರವೇಶವನ್ನು ಕೂಡ ಕಡ್ಡಾಯವಾಗಿ ನಿಷೇಧಿಸಿದೆ. ಆಹಾರ ತಯಾರಿ ಮತ್ತು ಶೇಖರಣೆ ಸಂಗ್ರಹ ಸಂದರ್ಭ ಸುರಕ್ಷಾ ಕಾಯ್ದೆಯ ನಿಯಮಗಳನ್ನು ಜಾರಿಗೆ ತರಲು ನಿರ್ಧರಿಸಿದೆ.