ರಮೇಶ್ ಬಾಬು ಅವರು ಜೆಡಿಎಸ್ ತೊರೆಯುತ್ತಿರುವ ಕುರಿತು, ‘ಅಧಿಕಾರ ಸಿಕ್ಕಿದಾಗ ಎಲ್ಲವೂ ಚೆನ್ನಾಗಿರುತ್ತದೆ. ಅಧಿಕಾರ ಸಿಗದಿದ್ದಾಗ ವರಿಷ್ಠರ ನಡೆ ಚೆನ್ನಾಗಿ ಕಾಣುವುದಿಲ್ಲ. ಇದು ಸರ್ವೇಸಾಮಾನ್ಯ. ಯಾರೋ ಒಬ್ಬ ವ್ಯಕ್ತಿ ಬಿಟ್ಟು ಹೋಗುವುದರಿಂದ ಪಕ್ಷಕ್ಕೆ ಏನೂ ಆಗುವುದಿಲ್ಲ. ಕಾರ್ಯಕರ್ತರಿಂದ ಪಕ್ಷ ಉಳಿದಿದೆ, ಬೆಳೆದಿದೆ’ ಎಂದರು.