ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇಷಗಿರಿರಾವ್‌, ಆಮೂರ ಸೇರಿ ಐವರಿಗೆ ಪ್ರಶಸ್ತಿ

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
Last Updated 7 ಜನವರಿ 2019, 19:09 IST
ಅಕ್ಷರ ಗಾತ್ರ

ಬೆಂಗಳೂರು: ಹಿರಿಯ ಸಾಹಿತಿಗಳಾದ ಎಲ್.ಎಸ್.ಶೇಷಗಿರಿರಾವ್‌, ಜಿ.ಎಸ್‌.ಆಮೂರ ಸೇರಿದಂತೆ ಐವರಿಗೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ 2018–19ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಯನ್ನು ನೀಡಿದೆ.

2017ರಲ್ಲಿ ಅನುವಾದಗೊಂಡಿರುವ ಐದು ಪುಸ್ತಕಗಳಿಗೆ ‘ಪುಸ್ತಕ ಬಹುಮಾನ’ವನ್ನೂ ಪ್ರಕಟಿಸಲಾಗಿದೆ.

ಗೌರವ ಪ್ರಶಸ್ತಿಯು ತಲಾ ₹ 50 ಸಾವಿರ ನಗದು, ಸ್ಮರಣಿಕೆ ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ. ಪುಸ್ತಕ ಬಹುಮಾನ ತಲಾ ₹25 ಸಾವಿರ ನಗದು, ಸ್ಮರಣಿಕೆ ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಕೆ.ಮರುಳಸಿದ್ದಪ್ಪ ತಿಳಿಸಿದ್ದಾರೆ.

ಗೌರವ ಪ್ರಶಸ್ತಿ: ಎಲ್.ಎಸ್.ಶೇಷಗಿರಿರಾವ್ (ಬೆಂಗಳೂರು), ಜಿ.ಎಸ್.ಆಮೂರ (ಧಾರವಾಡ), ಶಾ.ಮಂ.ಕೃಷ್ಣರಾಯ (ಬೆಂಗಳೂರು), ಕಾಶೀನಾಥ ಅಂಬಲಗಿ (ಕಲಬುರ್ಗಿ), ವೀಣಾ ಶಾಂತೇಶ್ವರ (ಧಾರವಾಡ).

ಪುಸ್ತಕ ಬಹುಮಾನ ವಿಭಾಗ: ಪ್ರೀತಿಯ ನಲವತ್ತು ನಿಯಮಗಳು– ಮಮತಾ ಜಿ.ಸಾಗರ್‌ (ಇಂಗ್ಲಿಷ್‌ನಿಂದ ಕನ್ನಡ), ಶಿಖರ ಸೂರ್ಯ–ಲಕ್ಷ್ಮಿ ಚಂದ್ರಶೇಖರ್ (ಕನ್ನಡದಿಂದ ಇಂಗ್ಲಿಷ್‌), ಚಿಂತಾಮಣಿ–ಜಿ.ವಿ.ರೇಣುಕಾ (ಹಿಂದಿಯಿಂದ ಕನ್ನಡ), ಜುಮ್ಮಾ–ಸೃಜನ್‌ (ಹಿಂದಿಯೇತರ ಭಾರತೀಯ ಭಾಷೆಗಳಿಂದ ಕನ್ನಡ), ಇಲಾ ಒಕಜೀವಿತಂ–ಸ.ರಘುನಾಥ (ಕನ್ನಡದಿಂದ ಬೇರೆ ಭಾರತೀಯ ಭಾಷೆಗೆ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT