ಮೈಸೂರು: ನಗರದ ವಿಮಾನ ನಿಲ್ದಾಣದ ಆವರಣದಲ್ಲಿ ಚಿರತೆಯೊಂದು ಕಾಣಿಸಿಕೊಂಡಿರುವ ವಿಡಿಯೊ ವಾಟ್ಸ್ಆ್ಯಪ್ಗಳಲ್ಲಿ ಹರಿದಾಡುತ್ತಿದೆ.
ವಿಮಾನ ನಿಲ್ದಾಣದಿಂದ ವ್ಯಕ್ತಿಯೊಬ್ಬರು ಕಾರಿನಲ್ಲಿ ಹೊರ ಹೋಗುವಾಗ ಚಿರತೆ ಅಡ್ಡ ಬಂದಿದ್ದು, ಗಿಡಗಂಟಿಗಳ ನಡುವೆ ಓಡಿ ಹೋಗಿರುವ ದೃಶ್ಯಗಳು ವಿಡಿಯೊದಲ್ಲಿದೆ.
ವಿಮಾನ ನಿಲ್ದಾಣ ಆವರಣದಲ್ಲಿ ಚಿರತೆ ಕಾಣಿಸಿಕೊಂಡಿರುವ ಕುರಿತು ಮಾಹಿತಿ ಬಂದಿದೆ. ಹುಡಕಾಟ ನಡೆಸಿದರೂ ಅದರ ಹೆಜ್ಜೆ ಗುರುತುಗಳು ಪತ್ತೆಯಾಗಿಲ್ಲ. ಗಿಡಗಂಟಿಗಳು ಸಾಕಷ್ಟು ಬೆಳೆದಿರುವುದರಿಂದ ಹುಡುಕಾಟಕ್ಕೂ ತೊಂದರೆಯಾಗಿದೆ. ಮತ್ತೆ ಕಾಣಿಸಿಕೊಂಡರೆ ಬೋನು ಇಡಲಾಗುವುದು ಎಂದು ಆರ್ಎಫ್ಒ ದೇವರಾಜು ತಿಳಿಸಿದರು.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ವಿಮಾನ ನಿಲ್ದಾಣದ ಆವರಣದಲ್ಲಿ ನರಿಗಳು ಕಾಣಿಸಿಕೊಂಡಿದ್ದವು. ಅರಣ್ಯ ಇಲಾಖೆ ಸಿಬ್ಬಂದಿ ಹೊರಗಟ್ಟಿದ್ದರು.