ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಂತಕುಮಾರ್‌ಗೆ ಜೀವ ಬೆದರಿಕೆ ಕರೆ

ದೂರು ದಾಖಲು
Last Updated 20 ಏಪ್ರಿಲ್ 2019, 19:41 IST
ಅಕ್ಷರ ಗಾತ್ರ

ಶಿರಸಿ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರಿಗೆ ಜೀವ ಬೆದರಿಕೆ ಕರೆ ಬಂದಿರುವ ಸಂಬಂಧ ಶನಿವಾರ ಇಲ್ಲಿನ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಶುಕ್ರವಾರ ತಡರಾತ್ರಿ 12.25ರ ಸುಮಾರಿಗೆ ಅನಂತಕುಮಾರ ಹೆಗಡೆ ಮನೆಯ ಸ್ಥಿರ ದೂರವಾಣಿ (08384–234337)ಗೆ ಇಂಟರ್‌ನೆಟ್ ಕಾಲ್ (0022330000) ಮೂಲಕ ದುಷ್ಕರ್ಮಿಗಳು ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ದೂರವಾಣಿ ಕರೆ ಸ್ವೀಕರಿಸಿದ ಹೆಗಡೆ ಪತ್ನಿ ಶ್ರೀರೂಪಾ ಅವರಿಗೆ ‘ಎಲ್ಲಿ ನಿನ್ನ ಗಂಡ, ಇವತ್ತು ಎಲ್ಲಿ ಅಡಗಿ ಕುಳಿತಿದ್ದಾನೆ ? ಪೋನ್ ಮಾಡಿದರೆ ಎತ್ತುವುದಿಲ್ಲ. ಪೊಲೀಸ್ ಭದ್ರತೆ ಇದ್ದರೂ ಅವನನ್ನು ಮುಗಿಸದೇ ಬಿಡುವುದಿಲ್ಲ, ನಿನ್ನ ಗಂಡ ಮತ್ತು ಅವನ ಭದ್ರತಾ ಪಡೆಯನ್ನು ಮುಗಿಸುತ್ತೇವೆ’ ಎಂದು ಕರೆ ಮಾಡಿದ ವ್ಯಕ್ತಿ ಹೆದರಿಸಿದ್ದಾನೆ. ಅನಾಮಿಕ ವ್ಯಕ್ತಿ ಸುಮಾರು 20 ನಿಮಿಷಗಳ ಕಾಲ ಮಾತನಾಡಿದ್ದಾನೆ ಎಂದು ಸಚಿವರ ಆಪ್ತ ಸಹಾಯಕ ಸುರೇಶ ಶೆಟ್ಟಿ ದೂರಿನಲ್ಲಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT