ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯ ಸಿಗದೆ ವ್ಯಕ್ತಿ ಸಾವು

Last Updated 2 ಏಪ್ರಿಲ್ 2020, 12:15 IST
ಅಕ್ಷರ ಗಾತ್ರ

ಪುತ್ತೂರು: ಮದ್ಯವ್ಯಸನಿಯೊಬ್ಬರು ಕುಡಿಯಲು ಮದ್ಯ ಸಿಗದೆ ಮಾನಸಿಕವಾಗಿ ಕುಗ್ಗಿ, ಮೃತಪಟ್ಟ ಘಟನೆ ಸವಣೂರು ಗ್ರಾಮದ ಚಾಪಲ್ಲ ಎಂಬಲ್ಲಿ ಗುರುವಾರ ನಡೆದಿದೆ.

ಮೃತ ವ್ಯಕ್ತಿ ಆನಂದ (32) ಪ್ರತಿದಿನ ಮದ್ಯ ಸೇವಿಸುತ್ತಿದ್ದರು. ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಸರ್ಕಾರ ಲಾಕ್‌ಡೌನ್‌ ಘೋಷಿಸಿದ ಬಳಿಕ ಎಲ್ಲ ಮದ್ಯದಂಗಡಿಗಳು ಬಂದ್ ಆಗಿದ್ದವು. ಎಲ್ಲಿಯೂ ಮದ್ಯ ಸಿಗದ ಕಾರಣ ಅವರು ಮಾನಸಿಕವಾಗಿ ಕುಗ್ಗಿದ್ದರು. ಮದ್ಯದಂಗಡಿ ಬಂದ್ ಆಗಿದ್ದರೂ ವೈನ್‌ ಶಾಪ್‌ ಎದುರು ಕಾಯುತ್ತ ಕಾಲ ಕಳೆಯುತ್ತಿದ್ದರೆನ್ನಲಾದ ಅವರು ಗುರುವಾರ ಮನೆಯಲ್ಲಿ ಮೃತಪಟ್ಟಿದ್ದಾರೆ.

ಮೃತರಿಗೆ ತಂದೆ, ತಾಯಿ ಹಾಗೂ ಸಹೋದರ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT