ಗುತ್ತಿಗೆದಾರ ಮೈಸೂರಿನ ಲಿಂಗರಾಜ್, ಸದ್ಯ ಆರು ಮನೆಗಳನ್ನು ಕಟ್ಟುತ್ತಿದ್ದಾರೆ. ಅವರ ಬಳಿ ಕರ್ನಾಟಕ, ರಾಜಸ್ಥಾನ, ಬಿಹಾರ ಉತ್ತರ ಪ್ರದೇಶದ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ‘ಲಾಕ್ಡೌನ್ ಆದ ಬಳಿಕ ಊರುಗಳಿಗೆ ಮರಳಿದ್ದಾರೆ. ಕೆಲಸ ನಿಂತಿದೆ. ಮನೆಯ ಮಾಲೀಕರು ಕೆಲಸ ವಿಳಂಬ ಆಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಹೇಳಿದರು.