ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಲಪಾಡ್ ಪ್ರಕರಣ ಮುಜುಗರ ತಂದಿದೆ; ಆತನ ಮನಸ್ಸಿನಲ್ಲಿ ರಾಕ್ಷಸನಿದ್ದಾನೆ ಎಂಬುದು ಗೊತ್ತಿರಲಿಲ್ಲ‌: ಪ್ರಕಾಶ್‌ ರೈ

Last Updated 26 ಫೆಬ್ರುವರಿ 2018, 12:16 IST
ಅಕ್ಷರ ಗಾತ್ರ

ಮೈಸೂರು: ‘ಮೊಹಮ್ಮದ್‌ ನಲಪಾಡ್‌ನನ್ನು ಹೊಗಳಿದ್ದು ಖಂಡಿತ ಈಗ ಮುಜುಗರ ಉಂಟು ಮಾಡಿದೆ. ಯಾರನ್ನಾದರೂ ಹೊಗಳುವ ಮುನ್ನ ಎಚ್ಚರ ವಹಿಸಬೇಕು. ಪೂರ್ವಾಪರ ತಿಳಿದು ಹೊಗಳಬೇಕು’ ಎಂದು ನಟ ಪ್ರಕಾಶ್‌ ರೈ ಹೇಳಿದರು.

ಇಲ್ಲಿ ಸೋಮವಾರ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಎಲ್ಲಾ ಪಂಥದವರು ಒಂದೇ ಕಡೆ ಸೇರಿರುವುದು ಒಳ್ಳೆಯದು ಎಂದು ಅಂದಿನ ಕಾರ್ಯಕ್ರಮದಲ್ಲಿ ಹೇಳಿದ್ದೆ. ಒಂದು ಗ್ರಾಮವನ್ನು ದತ್ತು ತೆಗೆದುಕೊಳ್ಳಲು ನಲಪಾಡ್‌ ಹಣ ನೀಡಿದ್ದರು. ಹೀಗಾಗಿ, ಯುವಕರು ಇಂಥ ಗುಣ ಬೆಳೆಸಿಕೊಳ್ಳಬೇಕು ಎಂದಿದ್ದೆ. ಆದರೆ, ಆತನ ಮನಸ್ಸಲ್ಲಿ ರಾಕ್ಷಸನಿದ್ದಾನೆ ಎಂಬುದು ಗೊತ್ತಿರಲಿಲ್ಲ‌’ ಎಂದರು.

ಅನಂತಕುಮಾರ ಹೆಗಡೆ ‘ಕೌಶಲ’ ಭಯ ಮೂಡಿಸುತ್ತಿದೆ: ರೈ
‘ಸಚಿವ ಅನಂತಕುಮಾರ ಹೆಗಡೆ ಅವರ ‘ಕೌಶಲ’ ಭಯ ಮೂಡಿಸುತ್ತಿದೆ. ಕೌಶಲಾಭಿವೃದ್ಧಿ ಬಗ್ಗೆ ಭಾಷಣ ಮಾಡುವ ಬದಲು ಅಲ್ಪಸಂಖ್ಯಾತರ ಕುರಿತು ಕೀಳಾಗಿ ಮಾಡುತ್ತಾರೆ. ಇಂಥ ರಾಕ್ಷಸರ ಬಗ್ಗೆ ಆತಂಕ ಉಂಟಾಗುತ್ತಿದೆ’ ಎಂದು ನಟ ಪ್ರಕಾಶ್‌ ರೈ ಇಲ್ಲಿ ಸೋಮವಾರ ವಾಗ್ದಾಳಿ ನಡೆಸಿದರು.

‘ಒಂದು ಸಮುದಾಯದ ಬಗ್ಗೆ, ಹೆಣ್ಣು ಮಕ್ಕಳ ಬಗ್ಗೆ ಈ ರೀತಿ ಕೀಳಾಗಿ ಮಾತನಾಡುವ ಇಂಥವರು ನಾಯಕರೇ? ಇಂಥವರ ಮಾತು ಕೇಳಿಸಿಕೊಂಡು ಜನ ಏಕೆ ಸುಮ್ಮನಿದ್ದಾರೆ? ಅಸಭ್ಯ ಮಾತು ಶೋಭೆ ತರುತ್ತದೆಯೇ? ಇಂಥ ಉದ್ಧಟತನದ, ಬೇಜವಾಬ್ದಾರಿ ಸಂಸದರು ನಮಗೆ ಬೇಕೇ’ ಎಂದು ಮಾಧ್ಯಮ ಸಂವಾದದಲ್ಲಿ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT