ರಾಜ್ಯಪಾಲರು ಈ ಶಿಫಾರಸನ್ನು ತಿರಸ್ಕರಿಸಿ ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದರು. ಸರ್ಕಾರ ಮತ್ತೊಮ್ಮೆ ರಾಜೇಗೌಡರ ಹೆಸರನ್ನೇ ಶಿಫಾರಸು ಮಾಡಿ ರಾಜಭವನಕ್ಕೆ ಕಳುಹಿಸಿತ್ತು. ಈ ಹಂತದಲ್ಲಿ ರಾಜ್ಯಪಾಲರು ಸರ್ಕಾರ ಸೂಚಿಸಿದ ಹೆಸರನ್ನೇ ಕುಲಪತಿ ಹುದ್ದೆಗೆ ಆಯ್ಕೆ ಮಾಡಬೇಕು. ರಾಜ್ಯಪಾಲರಿಗೆ ಈಗಲೂ ಈ ಶಿಫಾರಸಿನಲ್ಲಿ ನಂಬಿಕೆ ಇಲ್ಲ ಎಂದಾದರೆ ಪಟ್ಟಿಯಲ್ಲಿರುವ ಇತರ ಇಬ್ಬರ ಹೆಸರಲ್ಲಿ ಒಬ್ಬರ ಹೆಸರನ್ನು ಆಯ್ಕೆ ಮಾಡುವ ಅಧಿಕಾರ ಇಲ್ಲ, ಬದಲಿಗೆ ಶೋಧನಾ ಸಮಿತಿಯಿಂದ ಬೇರೆ ಮೂವರ ಹೆಸರು ಸೂಚಿಸುವಂತೆ ತಿಳಿಸುವ ಅಧಿಕಾರ ಇದೆ.