ಎಂ.ಆರ್.ಬ್ರದರ್ಸ್ ಸಂಘಟನೆ ಆಯೋಜಿಸಿದ್ದ 'ಬದಲಾಗುತ್ತಿರುವ ಭಾರತ- ವಿಶ್ವಗುರು ಭಾರತದತ್ತ ಚಿತ್ತ- ದೇಶ ನಡೆಸಲು ಮೋದಿ ಸಮರ್ಥ' ಕಾರ್ಯಕ್ರಮದಲ್ಲಿ ಮಾತನಾಡಿದ ಅನಂತಕುಮಾರ್ ಹೆಗಡೆ, ‘ರಾಜಕೀಯ ಹೊರತುಪಡಿಸಿ ದೇಶ ಕಟ್ಟುವ ಕಾಯಕದಲ್ಲಿ ಹಲವು ಕೈಗಳು ಬಿಜೆಪಿ ಜೊತೆ ಸೇರಿವೆ. ನಮ್ಮಲ್ಲಿ ಅಭಿಪ್ರಾಯ ಭೇದ ಇದ್ದರೂ ದೇಶ ಕಟ್ಟುವ ವಿಚಾರದಲ್ಲಿ ಗೊಂದಲ, ಭಿನ್ನಾಭಿಪ್ರಾಯ ಹಾಗೂ ಇಬ್ಬಗೆಯಿಲ್ಲ’ ಎಂದರು.