ಹಲ್ಲೆ ನಡೆಸಿರುವ ಪಾಷಾ, ಉದಯಗಿರಿ ನಿವಾಸಿಯಾಗಿದ್ದು ಕರಕೌಶಲ ಕಾರ್ಮಿಕನಾಗಿದ್ದಾನೆ. ಹಲ್ಲೆಗೆ ಕಾರಣ ಏನೆಂಬುದರ ಬಗ್ಗೆ ನಾವು ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ಹೇಳಿದ್ದಾರೆ. ಆದಾಗ್ಯೂ, ಪಾಷಾ ಹಲವಾರು ಬಾರಿ ಸೇಠ್ ಅವರಲ್ಲಿ ಕೆಲಸ ಕೊಡಿಸುವಂತೆ ಬೇಡಿದ್ದನು. ಅದು ವಿಳಂಬವಾದ ಹತಾಶೆಯಿಂದ ಆತ ಹಲ್ಲೆ ನಡೆಸಿದ್ದಾನೆ ಎಂದು ಬಲ್ಲಮೂಲಗಳು ಹೇಳಿವೆ.