ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಂತ್ರಿ ಸತ್ತರೆ ಏನೂ ಆಗದು ಎಂಬ ಮಾತನ್ನು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಡಬಾರದಿತ್ತು. ಸ್ವಾಮೀಜಿ ಬಾಯಿಂದ ಇಂತಹ ಮಾತುಗಳನ್ನು ಸಮಾಜ ನಿರೀಕ್ಷೆ ಮಾಡುವುದಿಲ್ಲ. ಶ್ರೀಗಳು ಸಮಾಜಕ್ಕೆ ಮಾದರಿಯಾಗಬೇಕೇ ಹೊರತು ಮತ್ತೊಬ್ಬರ ಸಾವು ಬಯಸಬಾರದು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.