ಕಾರು ಅಪಹರಿಸಿ ಮಾರಾಟ ಮಾಡುವ ಉದ್ದೇಶದಿಂದ ಬಾಡಿಗೆ ನೆಪದಲ್ಲಿಜಮಖಂಡಿ ನಗರದ ಅವಟಿ ಗಲ್ಲಿಯ ರಾಘವೇಂದ್ರ ಚನ್ನಪ್ಪ ಸಂಗೊಳ್ಳಿ (29) ಎಂಬುವರನ್ನು 2012ರ ಆಗಸ್ಟ್ 13ರಂದು ಮೂವರೂ ಕರೆದೊಯ್ದಿದ್ದರು. ರಾತ್ರಿ ರಾಘವೇಂದ್ರ ತೊಟ್ಟಿದ್ದ ಬಟ್ಟೆಯಿಂದಲೇ ಕೈಕಾಲು ಕಟ್ಟಿ ಹುಬ್ಬಳ್ಳಿ- ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿನ ಕೋಲ್ಹಾರ ಸೇತುವೆಯ ಮೇಲಿನಿಂದ ಕೃಷ್ಣಾ ನದಿಗೆ ಎಸೆದು ಕೊಲೆ ಮಾಡಿದ್ದರು.