ಅಗತ್ಯ ಇದ್ದರೆ ಪಠ್ಯಪುಸ್ತಕ ಪರಿಷ್ಕರಣೆ ಮಾಡಲಾಗುವುದು ಎಂಬ ನೂತನ ಶಿಕ್ಷಣ ಸಚಿವ ಎಸ್.ಆರ್.ಶ್ರೀನಿವಾಸ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ‘ಎರಡು ವರ್ಷಗಳಿಂದ ಜಾರಿಯಲ್ಲಿರುವ ಹೊಸ ಪಠ್ಯವನ್ನು ಪರಿಷ್ಕರಿಸಲೇಬಾರದು ಎಂದು ಹೇಳುತ್ತಿಲ್ಲ. ಇತರ ರಾಜ್ಯಗಳಲ್ಲಿನ ಪಠ್ಯಗಳನ್ನು ಹೋಲಿಕೆ ಮಾಡಿ ನೋಡಿ ಸುಧಾರಣೆ ತರುವುದು ಉತ್ತಮ. ಆದರೆ ಪರಿಷ್ಕರಣೆ ಹೆಸರಲ್ಲಿ ಎನ್ಸಿಇಆರ್ಟಿ ಪಠ್ಯವನ್ನೇ ಯಥಾವತ್ತಾಗಿ ಅನುವಾದ ಮಾಡಿ ಕೊಡುವುದಕ್ಕೆ ನನ್ನ ಸ್ಪಷ್ಟ ವಿರೋಧ ಇದೆ’ ಎಂದರು.