ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

13 ಶಾಸಕರ ಪ್ರಮಾಣ ವಚನ

Last Updated 22 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ 15 ಅಭ್ಯರ್ಥಿಗಳಲ್ಲಿ 13 ಮಂದಿ ಭಾನುವಾರ ವಿಧಾನಸೌಧದಲ್ಲಿ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಮಾಣವನ್ನು ಬೋಧಿಸಿ, ಎಲ್ಲರಿಗೂ ಸಂವಿಧಾನದ ಪ್ರತಿಗಳನ್ನು ನೀಡಿದರು. ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ ಹುಣಸೂರು ಕ್ಷೇತ್ರದ ಎಚ್‌.ಪಿ.ಮಂಜುನಾಥ್‌, ಶಿವಾಜಿನಗರ ಕ್ಷೇತ್ರದಿಂದ ಆಯ್ಕೆಯಾಗಿರುವ ರಿಜ್ವಾನ್‌ ಅರ್ಷದ್‌ ಭಾಗವಹಿಸಿರಲಿಲ್ಲ.

ಪ್ರಮಾಣ ಸ್ವೀಕರಿಸಿದವರು: ಮಹೇಶ ಕುಮಠಳ್ಳಿ– ಅಥಣಿ, ಶ್ರೀಮಂತ ಪಾಟೀಲ– ಕಾಗವಾಡ, ರಮೇಶ ಜಾರಕಿಹೊಳಿ– ಗೋಕಾಕ, ಶಿವರಾಮ್ ಹೆಬ್ಬಾರ್– ಯಲ್ಲಾಪುರ, ಬಿ.ಸಿ.ಪಾಟೀಲ– ಹಿರೇಕೆರೂರು, ಅರುಣ್‌ ಕುಮಾರ್ ಗುತ್ತೂರು– ರಾಣೆಬೆನ್ನೂರು, ಆನಂದ ಸಿಂಗ್‌– ವಿಜಯನಗರ, ಡಾ.ಕೆ.ಸುಧಾಕರ್– ಚಿಕ್ಕಬಳ್ಳಾಪುರ, ಬೈರತಿ ಬಸವರಾಜ್– ಕೃಷ್ಣರಾಜಪುರ, ಎಸ್‌.ಟಿ.ಸೋಮಶೇಖರ್– ಯಶವಂತಪುರ, ಕೆ.ಗೋಪಾಲಯ್ಯ– ಮಹಾಲಕ್ಷ್ಮಿಲೇಔಟ್‌, ಎಂ.ಸಿ.ನಾರಾಯಣಗೌಡ– ಕೆ.ಆರ್.ಪೇಟೆ (ಎಲ್ಲರೂ ಬಿಜೆಪಿ), ಹೊಸಕೋಟೆ– ಶರತ್‌ ಬಚ್ಚೇಗೌಡ (ಪಕ್ಷೇತರ).

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಸಚಿವರಾದ ಆರ್‌.ಅಶೋಕ್‌, ಬಸವರಾಜ ಬೊಮ್ಮಾಯಿ, ಎಸ್‌.ಸುರೇಶ್‌ ಕುಮಾರ್‌, ಎಚ್‌.ನಾಗೇಶ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT