‘ಎಲ್ಲರಿಗೂ ಸಚಿವ ಸ್ಥಾನ, ಎರಡೆರಡು ಹುದ್ದೆ ಬೇಕು. ಸಚಿವ ಸ್ಥಾನ ದೊರೆಯದಿದ್ದಲ್ಲಿ ಪಕ್ಷಾಂತರ ಮಾಡುತ್ತಾರೆ. ಇಲ್ಲವೇ, ರಾಜೀನಾಮೆಗೆ ಮುಂದಾಗುತ್ತಾರೆ. ಅಂಥವರನ್ನು ಸಮಾಧಾನಪಡಿಸುವುದರಲ್ಲೇ ಯಡಿಯೂರಪ್ಪ ಸಮಯ ಹಾಳಾಗುತ್ತಿದೆ. ಸದ್ಯದ ರಾಜಕೀಯ ಪರಿಸ್ಥಿತಿ ಅವಲೋಕಿಸಿದರೆ ರಾಜಕಾರಣಕ್ಕೆ ಭವಿಷ್ಯವಿಲ್ಲ ಎನ್ನುವಂತಾಗಿದೆ’ ಎಂದು ಹೇಳಿದರು.