ಹರಿಹರ: ‘ಹರನ ಉಪಾಸಕರಾದ ವೀರಶೈವ ಲಿಂಗಾಯತ ಪಂಚಮಸಾಲಿಗಳು ಮತ್ತು ಹರಿಯ ಉಪಾಸಕ
ರಾದ ವಾಲ್ಮೀಕಿ ಸಮುದಾಯದವರು ಭಾವನಾತ್ಮಕವಾಗಿ ಒಂದಾಗಿರಬೇಕು. ಈ ಎರಡೂ ಸಮುದಾಯಗಳವರು ಅಸಂಘಟಿತರಾಗಿ ಇರುವಾಗಲೇ 21 ಮಂದಿ ಶಾಸಕರಾಗಿದ್ದಾರೆ. ಈ ಸಂಖ್ಯೆಯನ್ನು 51ಕ್ಕೆ ತಲುಪಿಸಬೇಕು’ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.