‘ಕಿರುಕುಳಕ್ಕೆ ಜಾತಿಯೇ ಕಾರಣ’: ‘ಆರೇಳು ತಿಂಗಳಿನಿಂದ ಡಾ.ಗೀತಾ ಕಿರುಕುಳ ನೀಡುತ್ತಿದ್ದಾರೆ ಎಂದು ಒಂದೆರಡು ಬಾರಿ ನಮ್ಮ ಬಳಿ ಹೇಳಿದ್ದ. ಜಾತಿ ಹೆಸರಿನಲ್ಲಿ ನಿಂದಿಸುತ್ತಿದ್ದರು ಎಂದಿದ್ದ. ಮೀಸಲಾತಿಯಡಿ (ಪರಿಶಿಷ್ಟ ಪಂಗಡ) ಬಂದಿದ್ದೀಯಾ, ನಿಮ್ಮಂತಹವರಿಗೆ ಪ್ರಬಂಧ ಬರೆಯಲು ಬರುವುದಿಲ್ಲ ಎನ್ನುತ್ತಿದ್ದರು ಎಂಬುದನ್ನು ಓಂಕಾರ್ ನಮಗೆ ತಿಳಿಸಿದ್ದ’ ಎಂದು ತಂದೆ ಮಾಣಿಕ್ ಹಾಗೂ ತಾಯಿ ಪ್ರೇಮಲಾ ಬರಿದಾಬಾದ್ ‘ಪ್ರಜಾವಾಣಿ’ಗೆ ತಿಳಿಸಿದರು.