ಸುಮಾರು 30 ಮಂದಿ ಮರು ಅರ್ಜಿ ಸಲ್ಲಿಸಿದ್ದು, ಅದಕ್ಕೆ ಕಾರಣ ನೀಡಿಲ್ಲ. ಹೀಗಾಗಿ ಅವರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡುವುದಿಲ್ಲ. ಮೇ 5ರಂದು ಬೆಂಗಳೂರಿಗೆ ಬರುತ್ತಿದ್ದುದನ್ನು ಖಚಿತಪಡಿಸುವ ರೈಲು ಟಿಕೆಟ್ ಮತ್ತು ಪ್ರವೇಶ ಪತ್ರವನ್ನು ಅರ್ಜಿಯ ಜತೆಯಲ್ಲಿ ಇಟ್ಟವರಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.