ಮತ್ತೊಂದೆಡೆ, ಪೋಷಕರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ‘ರಾಘವೇಂದ್ರ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ. ಸೋಮವಾರ ಚಿಕಿತ್ಸೆಗೆ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿತ್ತು. ಮೂತ್ರ ಮಾಡುವುದಾಗಿ ಹೊರಗೆ ಹೋದವ ಮರಳಿ ಬರಲಿಲ್ಲ. ಬಳಿಕ ಮಾಧ್ಯಮಗಳಲ್ಲಿ ಮಗನ ಬಂಧನ ಸುದ್ದಿ ತಿಳಿಯಿತು' ಎಂದು ತಿಳಿಸಿದರು.