ಪಾಡ್ದನ, ಸಿರಿಜಾತ್ರೆ, ಪೆಂರ್ದೆರ್ ಮೊದಲಾದ ವಿಷಯಗಳ ಬಗ್ಗೆ ಅವರು ಬರೆದ ಲೇಖನಗಳು ಮಹತ್ವದವು. ಪ್ರೊ. ಎ.ವಿ.ನಾವಡ ಮತ್ತು ಸುಭಾಶ್ಚಂದ್ರ ಅವರು ಪೀಟರ್ ಅವರ ಎಂಟು ಸಂಶೋಧನಾ ಲೇಖನಗಳನ್ನು ಕನ್ನಡಕ್ಕೆ ಅನುವಾದಿಸಿ ‘ತುಳುವ ದರ್ಶನ’ ಎಂಬ ಕೃತಿ ಪ್ರಕಟಿಸಿದ್ದಾರೆ. ಇನ್ನೊಂದು ಸಂಪುಟ ಮುಂದಿನ ತಿಂಗಳು ಬಿಡುಗಡೆಗೆ ಸಿದ್ಧವಾಗಿದೆ. ವಿಶ್ವವಿದ್ಯಾಲಯದ ಅತಿಥಿಗೃಹಗಳಲ್ಲಿ ವಾಸ್ತವ್ಯಕ್ಕೆ ನಿರಾಕರಿಸಿ ಗುಡಿಸಲಿನಲ್ಲಿ ವಾಸಿಸುತ್ತ ಸಂಶೋಧನೆಯನ್ನು ನಡೆಸಿದ ಸರಳಜೀವಿಯಾಗಿದ್ದರು.