ಬೆಂಗಳೂರು:ಪಾದರಾಯನಪುರದಲ್ಲಿ ಭಾನುವಾರ ರಾತ್ರಿ ನಡೆದ ಘಟನೆ ಸಂಬಂಧ ಎಫ್ಐಆರ್ ದಾಖಲಾಗಿದೆ.
ಠಾಣೆ ಹೆಡ್ ಕಾನ್ಸ್ಟೆಬಲ್ ದಾದಾಪೀರ್ ಎಂಬುವರ ಹೇಳಿಕೆ ಆಧರಿಸಿ ಜಗಜೀವನರಾಮ ನಗರ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಾಗಿದೆ.
ಕೆಎಫ್ಡಿ ಇರ್ಫಾನ್, ವಾಜೀದ್, ಇರ್ಷಾದ್ ಅಹ್ಮದ್, ಮಹಿಳೆ ಫರ್ಜೊವಾ ಹಾಗೂ ಇತರರನ್ನು ಆರೋಪಿಗಳಾಗಿ ಮಾಡಲಾಗಿದೆ. ಈ ಬಗ್ಗೆ ಫರ್ಜೊವಾ ಎಂಬಾಕೆ ಮಾತ್ರ ಸಿಕ್ಕಿಬಿದ್ದಿದ್ದು, ಉಳಿದ ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.