‘ಗೋಪಾಲ್ ನಮ್ಮ ಸ್ನೇಹಿತ. ಭಾನುವಾರ ರಾತ್ರಿ ಮೂವರೂ ಬಾರ್ಗೆ ಹೋಗಿದ್ದೆವು. ಪಾನಮತ್ತರಾಗಿ ಹೊರಡುವಾಗ, ‘ನಾನಿನ್ನೂ ಕುಡಿಯಬೇಕು. ಆರ್ಡರ್ ಮಾಡಿ’ ಎಂದು ಗೋಪಾಲ್ ಜಗಳ ಶುರು ಮಾಡಿದ. ನಮ್ಮ ಬಳಿ ಹೆಚ್ಚಿನ ಹಣವಿಲ್ಲ ಎಂದು ಹೇಳಿದ್ದಕ್ಕೆ, ‘ಬಾರ್ಗೆ ಬಂದರೆ ತೃಪ್ತಿಯಾಗಿ ಕುಡಿಯಬೇಕು. ಕಡಿಮೆ ದುಡ್ಡು ಇಟ್ಟುಕೊಂಡು ನನ್ನನ್ನು ಏಕೆ ಕರೆದುಕೊಂಡು ಬಂದಿರಿ’ ಎಂದು ಎಲ್ಲರೆದರೂ ಅವಾಚ್ಯ ಶಬ್ದಗಳಿಂದ ನಿಂದಿಸಿದ. ಬೇಸರದಲ್ಲೇ ಅಲ್ಲಿಂದ ಹೊರಟು, ಕಾವೇರಿನಗರ ನಿಲ್ದಾಣಕ್ಕೆ ಬಂದು ಆಟೊದಲ್ಲಿ ಕುಳಿತುಕೊಂಡಿದ್ದೆವು’ ಎಂದು ಆರೋಪಿಗಳು ತಪ್ಪೊಪ್ಪಿಗೆ ಹೇಳಿಕೆಯಲ್ಲಿ ವಿವರಿಸಿದ್ದಾರೆ.