ಪುರಾತನ ಮಧುಕೇಶ್ವರ ದೇವಾಲಯದ ಪ್ರತಿಕೃತಿಯ ಮಾದರಿಯಲ್ಲಿ ಸಿದ್ಧವಾಗಿರುವ ವೇದಿಕೆಯಲ್ಲಿ ಸಚಿವ ಆರ್.ವಿ.ದೇಶಪಾಂಡೆ ಅವರು ಸಂಜೆ 7 ಗಂಟೆಗೆ ಕದಂಬೋತ್ಸವ ಉದ್ಘಾಟಿಸುವರು. ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ ಭಾಗವಹಿಸುವರು. ಉತ್ಸವದ ಅಂಗವಾಗಿ ಅನಾನಸ್ ಮೇಳ, ಕಾರ್ಟೂನ್ ಉತ್ಸವ, ಗಾಯಕರಾದ ಗುರುಕಿರಣ್ ಹಾಗೂ ಅರ್ಚನಾ ಉಡುಪ ಅವರ ರಸಮಂಜರಿ ಹಮ್ಮಿಕೊಳ್ಳಲಾಗಿದೆ.