<p><strong>ಹೊಸಪೇಟೆ:</strong> ಹಂಪಿ ಸ್ಮಾರಕಗಳಿಗೆ ಹಾನಿ ಉಂಟು ಮಾಡಿರುವ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿಸೋಮವಾರ ತಾಲ್ಲೂಕಿನ ಕಮಲಾಪುರದಲ್ಲಿ ನಡೆದ ಸಾಂಕೇತಿಕ ಪ್ರತಿಭಟನೆಯನ್ನು ಬೆಂಬಲಿಸಿ ಮೈಸೂರಿನ ಯದುವೀರ್ ನರಸಿಂಹರಾಜ ದತ್ತ ಒಡೆಯರ್, ವಿಜಯನಗರ ರಾಜಮನೆತನದ ಕೃಷ್ಣದೇವರಾಯ ಪಾಲ್ಗೊಂಡಿದ್ದರು.</p>.<p>ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣೆ ಸೇನೆಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಗೆವಿಜಯನಗರ ಅಂಗವಿಕಲರ ಸಂಘ, ಜನ್ಮಭೂಮಿ ರಕ್ಷಣಾ ಪಡೆ, ಗಂಡುಗಲಿ ಕುಮಾರರಾಮ ಸೇನೆ ಸಂಘಟನೆ ಬೆಂಬಲ ವ್ಯಕ್ತಪಡಿಸಿತ್ತು.</p>.<p>ಕಮಲಾಪುರದ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ (ಎ.ಎಸ್.ಐ.) ಹಂಪಿ ವೃತ್ತದ ಕಚೇರಿ ಎದುರು ಪ್ರತಿಭಟನೆ ನಡೆಸಿ, ನಂತರ ಎ.ಎಸ್.ಐ. ಡೆಪ್ಯುಟಿ ಸೂಪರಿಟೆಂಡೆಂಟ್ ಪಿ. ಕಾಳಿಮುತ್ತು ಅವರಿಗೆ ಮನವಿ ಪತ್ರ ಸಲ್ಲಿಸಿದರು.</p>.<p>‘ಹಂಪಿಯಲ್ಲಿರುವ ಎಲ್ಲ ಸ್ಮಾರಕಗಳ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ವಿಷ್ಣು ದೇಗುಲ ಮಂಟಪದ ಕಲ್ಲುಗಂಬಗಳನ್ನು ಬೀಳಿಸಿ, ವಿಡಿಯೊ ವೈರಲ್ ಮಾಡಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.</p>.<p>ಸಂರಕ್ಷಣೆ ಸೇನೆಯ ಮುಖ್ಯಸ್ಥ ವಿಶ್ವನಾಥ ಮಾಳಗಿ, ಮುಖಂಡರಾದ ಈರಣ್ಣ ಪೂಜಾರಿ, ಗುರುನಾಥ, ಶ್ರೀನಿವಾಸ ಗುಜ್ಜಲ್, ಉಪೇಂದ್ರ ನಾಯಕ, ಶಿವಕುಮಾರ ಇದ್ದರು.</p>.<p><strong>ಇನ್ನಷ್ಟು...</strong></p>.<p><strong>*<a href="https://www.prajavani.net/district/bellary/hampi-monument-stone-damage-611611.html" target="_blank">ಹಂಪಿ ಸ್ಮಾರಕದ ಕಲ್ಲು ಬೀಳಿಸುವ ವಿಡಿಯೊ ವೈರಲ್</a></strong></p>.<p><strong>*<a href="https://www.prajavani.net/stories/stateregional/monument-spoiled-youth-taken-611754.html" target="_blank">ಹಂಪಿ: ಕಲ್ಲುಗಂಬಗಳನ್ನು ಬೀಳಿಸುವ ವಿಡಿಯೊ ವೈರಲ್, ವಶಕ್ಕೆ ಪಡೆದು ಯುವಕನ ವಿಚಾರಣೆ</a></strong></p>.<p><strong>*<a href="https://www.prajavani.net/stories/stateregional/hampi-arrest-those-who-ruined-611744.html" target="_blank">ಸ್ಮಾರಕದ ಕಲ್ಲು ಬೀಳಿಸಿದ ದುಷ್ಟರನ್ನು ಬಂಧಿಸಿ: ಪೊಲೀಸರಿಗೆ ಜನರ ತಾಕೀತು</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ:</strong> ಹಂಪಿ ಸ್ಮಾರಕಗಳಿಗೆ ಹಾನಿ ಉಂಟು ಮಾಡಿರುವ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿಸೋಮವಾರ ತಾಲ್ಲೂಕಿನ ಕಮಲಾಪುರದಲ್ಲಿ ನಡೆದ ಸಾಂಕೇತಿಕ ಪ್ರತಿಭಟನೆಯನ್ನು ಬೆಂಬಲಿಸಿ ಮೈಸೂರಿನ ಯದುವೀರ್ ನರಸಿಂಹರಾಜ ದತ್ತ ಒಡೆಯರ್, ವಿಜಯನಗರ ರಾಜಮನೆತನದ ಕೃಷ್ಣದೇವರಾಯ ಪಾಲ್ಗೊಂಡಿದ್ದರು.</p>.<p>ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣೆ ಸೇನೆಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಗೆವಿಜಯನಗರ ಅಂಗವಿಕಲರ ಸಂಘ, ಜನ್ಮಭೂಮಿ ರಕ್ಷಣಾ ಪಡೆ, ಗಂಡುಗಲಿ ಕುಮಾರರಾಮ ಸೇನೆ ಸಂಘಟನೆ ಬೆಂಬಲ ವ್ಯಕ್ತಪಡಿಸಿತ್ತು.</p>.<p>ಕಮಲಾಪುರದ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ (ಎ.ಎಸ್.ಐ.) ಹಂಪಿ ವೃತ್ತದ ಕಚೇರಿ ಎದುರು ಪ್ರತಿಭಟನೆ ನಡೆಸಿ, ನಂತರ ಎ.ಎಸ್.ಐ. ಡೆಪ್ಯುಟಿ ಸೂಪರಿಟೆಂಡೆಂಟ್ ಪಿ. ಕಾಳಿಮುತ್ತು ಅವರಿಗೆ ಮನವಿ ಪತ್ರ ಸಲ್ಲಿಸಿದರು.</p>.<p>‘ಹಂಪಿಯಲ್ಲಿರುವ ಎಲ್ಲ ಸ್ಮಾರಕಗಳ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ವಿಷ್ಣು ದೇಗುಲ ಮಂಟಪದ ಕಲ್ಲುಗಂಬಗಳನ್ನು ಬೀಳಿಸಿ, ವಿಡಿಯೊ ವೈರಲ್ ಮಾಡಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.</p>.<p>ಸಂರಕ್ಷಣೆ ಸೇನೆಯ ಮುಖ್ಯಸ್ಥ ವಿಶ್ವನಾಥ ಮಾಳಗಿ, ಮುಖಂಡರಾದ ಈರಣ್ಣ ಪೂಜಾರಿ, ಗುರುನಾಥ, ಶ್ರೀನಿವಾಸ ಗುಜ್ಜಲ್, ಉಪೇಂದ್ರ ನಾಯಕ, ಶಿವಕುಮಾರ ಇದ್ದರು.</p>.<p><strong>ಇನ್ನಷ್ಟು...</strong></p>.<p><strong>*<a href="https://www.prajavani.net/district/bellary/hampi-monument-stone-damage-611611.html" target="_blank">ಹಂಪಿ ಸ್ಮಾರಕದ ಕಲ್ಲು ಬೀಳಿಸುವ ವಿಡಿಯೊ ವೈರಲ್</a></strong></p>.<p><strong>*<a href="https://www.prajavani.net/stories/stateregional/monument-spoiled-youth-taken-611754.html" target="_blank">ಹಂಪಿ: ಕಲ್ಲುಗಂಬಗಳನ್ನು ಬೀಳಿಸುವ ವಿಡಿಯೊ ವೈರಲ್, ವಶಕ್ಕೆ ಪಡೆದು ಯುವಕನ ವಿಚಾರಣೆ</a></strong></p>.<p><strong>*<a href="https://www.prajavani.net/stories/stateregional/hampi-arrest-those-who-ruined-611744.html" target="_blank">ಸ್ಮಾರಕದ ಕಲ್ಲು ಬೀಳಿಸಿದ ದುಷ್ಟರನ್ನು ಬಂಧಿಸಿ: ಪೊಲೀಸರಿಗೆ ಜನರ ತಾಕೀತು</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>