ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇತ್ತೀಚೆಗೆ ಶೃಂಗೇರಿಯ ದೇವಸ್ಥಾನಕ್ಕೆ ಭೇಟಿ ನೀಡಿ, ಶಾರದಾ ಪೀಠಕ್ಕೆ ಪೂಜೆ ಸಲ್ಲಿಸಿದರು. ನಂತರ ಮಠದ ಶ್ರೀಗಳ ಜತೆಗೆ ಅಧ್ಯಾತ್ಮದ ಬಗ್ಗೆ ಚರ್ಚಿಸಿದರು. ಮಠದ ಪಾಠಶಾಲೆಯ ಮಕ್ಕಳೊಂದಿಗೆ ಸಂವಾದ ನಡೆಸಿರುವುದಾಗಿಯೂ ವರದಿಯಾಗಿದೆ. ಮುಂದೆ, ಶೃಂಗೇರಿಯಿಂದ ಚಿಕ್ಕಮಗಳೂರಿಗೆ ತೆರಳಿದ ರಾಹುಲ್, ತಮಗೆ ಶೃಂಗೇರಿ ಪೀಠದಲ್ಲಿನ ಧಾರ್ಮಿಕ, ಆಧ್ಯಾತ್ಮಿಕ ವಾತಾವರಣದಲ್ಲಿ ಉಂಟಾದ ಅನುಭವಗಳ ಬಗ್ಗೆ ಏನನ್ನೂ ಹೇಳದೆ, ‘ಶೃಂಗೇರಿ ಪಾಠಶಾಲೆಯಲ್ಲಿ ಹದಿನೈದು ವರ್ಷದ ಮಕ್ಕಳಿಗೆ ಅರ್ಥವಾಗುವ ಧರ್ಮದ ವಿಚಾರ ನಮ್ಮ ಪ್ರಧಾನಿಗೆ ಅರ್ಥವಾಗುತ್ತಿಲ್ಲ’ ಎಂದು ಹೇಳುವುದರ ಮೂಲಕ ಮೋದಿ ಟೀಕೆಯಲ್ಲಿ ತೊಡಗಿಸಿಕೊಂಡರು. ಮಠ– ಮಂದಿರಗಳ ಭೇಟಿಯ ಹಿಂದಿರುವ ರಾಜಕೀಯ ಉದ್ದೇಶವನ್ನು ತಮ್ಮ ಮಾತಿನಿಂದಲೇ ಅವರು ತೋರಿಸಿಕೊಟ್ಟರು.