ಗಾಳಿಯ ಅಬ್ಬರಕ್ಕೆ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಮನೆಗಳ ಮೇಲೆ ಮರ ಮುರಿದು ಬಿದ್ದಿದೆ. ತತ್ವಣಗಿಯ ವಂದನಾ ಬೆನಿತ್ ದೊಡ್ಡಮನಿ, ಹೊಸೂರಿನ ಮಂಜುಳಾ ಗುರು ಪಾಗೋಜಿ ಅವರ ಮನೆಯ ಮನೆಯ ಚಾವಣಿಗಳು ಸಂಪೂರ್ಣ ಹಾರಿಹೋಗಿದ್ದು, ಮನೆಯಲ್ಲಿದ್ದ ಸಾಮಗ್ರಿಗಳು ನೀರಿನಲ್ಲಿ ತೋಯ್ದು ಹೋಗಿವೆ. ‘ಲಾಕ್ಡೌನ್ ಇರುವ ಕಾರಣ ಕೂಲಿ ಕೆಲಸವೂ ಇಲ್ಲ. ಸರ್ಕಾರ ನೀಡಿದ್ದ ಪಡಿತರ, ಸಂಘ–ಸಂಸ್ಥೆಗಳು ಕೊಟ್ಟಿದ್ದ ದಿನಸಿ ಸಾಮಗ್ರಿಗಳೇ ಆಧಾರವಾಗಿದ್ದವು. ಇವೆಲ್ಲವೂ ಮಳೆ ನೀರಿಗೆ ಸಿಲುಕಿ, ಹಾಳಾಗಿವೆ. ಮನೆ ದುರಸ್ತಿಗೂ ಕೈಯಲ್ಲಿ ಹಣವಿಲ್ಲ’ ಎಂದು ವಂದನಾ ಹೇಳುವಾಗ ಅವರ ಕಣ್ಣು ತೇವವಾಗಿತ್ತು.