ಕೃಷ್ಣಾ ನದಿಗೆ ಕಲ್ಲೋಳ ಬಳಿ ನಿರ್ಮಿಸಲಾದ ಕಲ್ಲೋಳ–ಯಡೂರ, ವೇದ ಹಾಗೂ ದೂಧ್ಗಂಗಾ ನದಿಗೆ ಕಾರದಗಾದಲ್ಲಿ ನಿರ್ಮಿಸಿರುವ ಕಾರದಗಾ–ಭೋಜ, ವೇದಗಂಗಾ ನದಿಗೆ ಭೋಜದಲ್ಲಿ ಕಟ್ಟಿರುವ ಭೋಜವಾಡಿ–ಕುನ್ನೂರ, ಸಿದ್ನಾಳ ಬಳಿಯ ಸಿದ್ನಾಳ–ಅಕ್ಕೋಳ, ಜತ್ರಾಟದಲ್ಲಿನ ಜತ್ರಾಟ–ಭಿವಶಿ, ದೂಧ್ಗಂಗಾ ನದಿಗೆ ಮಲ್ಲಿಕವಾಡ ಬಳಿ ನಿರ್ಮಿಸಿರುವ ಮಲಿಕವಾಡ–ದತ್ತವಾಡ ಸೇತುವೆಗಳು ಮುಳುಗಡೆ ಸ್ಥಿತಿಯಲ್ಲಿವೆ. ಇವು ಚಿಕ್ಕ ಬ್ರಿಡ್ಜ್ ಕಮ್ ಬ್ಯಾರೇಜ್ಗಳಾಗಿವೆ. ಪರ್ಯಾಯ ರಸ್ತೆಗಳಿರುವುದರಿಂದ ಸಂಚಾರಕ್ಕೆ ತೊಂದರೆಯಾಗಿಲ್ಲ; ಗ್ರಾಮಗಳ ಸಂಪರ್ಕ ಕಡಿತಗೊಂಡಿಲ್ಲ.