ಅಶ್ವಥ್ರ ತಾಯಿ ತೀರಿಕೊಂಡು ಹನ್ನೊಂದು ದಿನವಾಗಿದ್ದು, ಬೆಳಗ್ಗೆ ಎಲ್ಲ ಕಾರ್ಯ ಮುಗಿಸಿ ಬಂದ ಅವರು ತರಾತುರಿಯಲ್ಲಿ 2.30ರ ವೇಳೆಗೆ ನಾಮಪತ್ರ ಸಲ್ಲಿಸಿದರು. ಪಕ್ಷದ ಮುಖಂಡರಾದ ಆರ್. ಅಶೋಕ್, ಸಿ.ಪಿ. ಯೋಗೇಶ್ವರ್, ಕಟ್ಟಾ ಸುಬ್ರಮಣ್ಯನಾಯ್ಡು ಹಾಗೂ ಮಾಳವಿಕಾ ಅವಿನಾಶ್ ಸಾಥ್ ನೀಡಿದರು. ಬಿಜೆಪಿಯ ಜಿಲ್ಲಾ ಘಟಕದ ಕೆಲವು ಮುಖಂಡರು ಈ ಸಂದರ್ಭ ಗೈರಾಗಿದ್ದರು.