ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಗೊರೆ ಈಗ ಜೆಡಿಎಸ್ ಅಭ್ಯರ್ಥಿ ಸರದಿ

Last Updated 15 ಫೆಬ್ರುವರಿ 2020, 19:57 IST
ಅಕ್ಷರ ಗಾತ್ರ

ರಾಮನಗರ: ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪುಟ್ಟಣ್ಣರಿಂದ ಟಿಫನ್‌ ಕ್ಯಾರಿಯರ್ ಹಂಚಿಕೆ ಸುದ್ದಿ ಬೆನ್ನಲ್ಲೇ, ಜೆಡಿಎಸ್‌ ಅಭ್ಯರ್ಥಿ ಎ.ಪಿ. ರಂಗನಾಥ್‌ ಅವರಿಂದ ಬ್ಯಾಗ್‌ ಹಂಚಿಕೆ ಸುದ್ದಿಯಾಗುತ್ತಿದೆ.

ಜೆಡಿಎಸ್‌ ಅಭ್ಯರ್ಥಿಯಾಗಿರುವ ರಂಗನಾಥ್‌ ಅವರೂ ಸಹ ಈಗಾಗಲೇ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಹೆಸರು ಇರುವ ಬ್ಯಾಗ್‌ಗಳು ಹಲವರ ಕೈಯಲ್ಲಿ ಕಾಣಿಸಿಕೊಂಡಿವೆ. ಅದರ ಮೇಲೆ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರೂ ಆದ ರಂಗನಾಥ್‌ ಹೆಸರು ಬರೆಯಲಾಗಿದ್ದು, ಶಿಕ್ಷಣವೇ ನಾಡಿನ ಬಹುದೊಡ್ಡ ಆಸ್ತಿ ಎಂದು ಶಿಕ್ಷಕರನ್ನು ಉತ್ತೇಜಿಸುವ ಮಾತುಗಳು ಇವೆ. ವಾರಗಳ ಹಿಂದೆಯೇ ಇದನ್ನು ಹಂಚಲಾಗಿದೆ ಎಂದು ಕೆಲವು ಶಿಕ್ಷಕರು ಹೇಳಿದ್ದಾರೆ. ಆದರೆ ಬ್ಯಾಗ್‌ನ ಮೇಲೆ ಬರೆದ ಅಕ್ಷರಗಳಲ್ಲಿ ಎಲ್ಲಿಯೂ ಚುನಾವಣೆಯ ವಿಚಾರ ಪ್ರಸ್ತಾಪ ಆಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT