ಜೆಡಿಎಸ್ ಅಭ್ಯರ್ಥಿಯಾಗಿರುವ ರಂಗನಾಥ್ ಅವರೂ ಸಹ ಈಗಾಗಲೇ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಹೆಸರು ಇರುವ ಬ್ಯಾಗ್ಗಳು ಹಲವರ ಕೈಯಲ್ಲಿ ಕಾಣಿಸಿಕೊಂಡಿವೆ. ಅದರ ಮೇಲೆ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರೂ ಆದ ರಂಗನಾಥ್ ಹೆಸರು ಬರೆಯಲಾಗಿದ್ದು, ಶಿಕ್ಷಣವೇ ನಾಡಿನ ಬಹುದೊಡ್ಡ ಆಸ್ತಿ ಎಂದು ಶಿಕ್ಷಕರನ್ನು ಉತ್ತೇಜಿಸುವ ಮಾತುಗಳು ಇವೆ. ವಾರಗಳ ಹಿಂದೆಯೇ ಇದನ್ನು ಹಂಚಲಾಗಿದೆ ಎಂದು ಕೆಲವು ಶಿಕ್ಷಕರು ಹೇಳಿದ್ದಾರೆ. ಆದರೆ ಬ್ಯಾಗ್ನ ಮೇಲೆ ಬರೆದ ಅಕ್ಷರಗಳಲ್ಲಿ ಎಲ್ಲಿಯೂ ಚುನಾವಣೆಯ ವಿಚಾರ ಪ್ರಸ್ತಾಪ ಆಗಿಲ್ಲ.