‘ಕನ್ನಡ ವಿಷಯ ಪಠ್ಯಕ್ಕಂತೂ ಏಕರೂಪತೆ ಅನ್ವಯಿಸಬಾರದು. ಕನ್ನಡವು ರಾಜ್ಯ ಭಾಷೆಯಾಗಿದ್ದು, ಶಾಸ್ತ್ರೀಯ ಭಾಷಾ ಸ್ಥಾನಮಾನವನ್ನೂ ಪಡೆದಿದೆ. ಭಾಷೆ ಮತ್ತು ಸಾಹಿತ್ಯದ ದೃಷ್ಟಿಯಿಂದ ಭಾರತೀಯ ಭಾಷೆಗಳಲ್ಲೇ ಹಿರಿದಾದ ಚರಿತ್ರೆ ಹೊಂದಿದೆ. ಅದು ಪ್ರಾದೇಶಿಕವಾಗಿ ವೈವಿಧ್ಯಮಯವೂ ಆಗಿದೆ. ಹೀಗಾಗಿ, ಏಕರೂಪ ಪಠ್ಯ ಕಲಿಕೆಯಿಂದ ವಿದ್ಯಾರ್ಥಿಗಳು ಈ ವೈವಿಧ್ಯಮಯ ಜ್ಞಾನದಿಂದ ವಂಚಿತರಾಗಬೇಕಾಗುತ್ತದೆ’ ಎಂದು ತಿಳಿಸಿದರು.