ಆಟೊರಿಕ್ಷಾ ಓಡಿಸಿ ಜೀವನ ನಡೆಸುವ ವಿಶ್ವನಾಥ ಗೌಡ ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ, ‘ಕೊರೊನಾ ವೈರಸ್ ನಿಯಂತ್ರಿಸಲು ಹಲವಾರು ಔಷಧ ಪ್ರಯೋಗ ಮಾಡಲಾಗುತ್ತಿದೆ. ನನಗೆ ದೇಶದ ಮೇಲೆ ಅಭಿಮಾನವಿದೆ. ಹೀಗಾಗಿ, ಈ ಔಷಧ ಪ್ರಯೋಗವನ್ನು ನನ್ನ ದೇಹದ ಮೇಲೆ ಮಾಡಬಹುದು. ಸ್ವ ಇಚ್ಛೆಯಿಂದ ದೇಹವನ್ನು ದಾನ ಮಾಡಲು ಸಿದ್ಧನಿದ್ದೇನೆ’ ಎಂದು ತಿಳಿಸಿದ್ದಾರೆ.