ಸವಳಗಿ (ಬಾಗಲಕೋಟೆ): ‘ಜಮಖಂಡಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡ ಅವರನ್ನು ಗೆಲ್ಲಿಸಿದರೆ ಜಮಖಂಡಿ– ಸಾವಳಗಿ ರಸ್ತೆಗೆ ಮೂರು ತಿಂಗಳೊಳಗೆ ಡಾಂಬರು ಹಾಕಿಸಿ ಕೊಡುವೆ’ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಆಮಿಷ ಒಡ್ಡಿದರು.
ತಾಲ್ಲೂಕಿನ ಸಾವಳಗಿಯಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಈ ವೇಳೆ ವೇದಿಕೆಯಲ್ಲಿದ್ದ ಮುಖಂಡರು ಇದು ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ ಎಂದು ಹೇಳಲು ಮುಂದಾದರೂ ಅವರ ಮಾತನ್ನು ಪರಮೇಶ್ವರ ಕೇಳಿಸಿಕೊಳ್ಳಲಿಲ್ಲ.