ದಾಬಸ್ಪೇಟೆ ಪಟ್ಟಣದಿಂದ ಸಂಪರ್ಕ ಪಡೆಯುವ ರಸ್ತೆಗಳಿಂದ ಹಿಡಿದು ನರಸೀಪುರ, ಶಿವಗಂಗೆ, ಮರಳಕುಂಟೆ, ನಿಡವಂದ, ಆಗಲಕುಪ್ಪೆ ಭಾಗಗಳೆಡೆಗೆ ಬರುವ ಹಳ್ಳಿಗಳ ರಸ್ತೆಗಳ ಸ್ಥಿತಿ ಶೋಚನೀಯ. ‘ಶಾಸಕರಾಗಿ ಶ್ರೀನಿವಾಸ ಮೂರ್ತಿ ಅವರು ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ವಿವಿಧ ಕಾರ್ಯಕ್ರಮಗಳ ನಿಮಿತ್ತ ಇಲ್ಲೆಲ್ಲಾ ಸಂಚರಿಸುತ್ತಾರೆ. ಆದರೂ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಒತ್ತು ಕೊಟ್ಟಿಲ್ಲ’ ಅನ್ನುವ ದೂರು ಇಲ್ಲಿನ ಸಾರ್ವಜನಿಕರದು.