ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಈ ಸಿಡಿಗಳು ಹಲವರಿಗೆ ರಾಜಕೀಯ ಅಸ್ತಿತ್ವದ ಸ್ವತ್ತಗಳಾಗಿ ಪರಿವರ್ತನೆಯಾಗಿವೆ. ನಮ್ಮ ರಾಜ್ಯದಲ್ಲಿ ಬಿಡುಗಡೆ ಆಗಿರುವ ಸಿಡಿಗಳ ಸಂಖ್ಯೆ ನೋಡಿದರೆ ಇಷ್ಟುಹೊತ್ತಿಗೆ ಹಲವರು ಜೈಲಿಗೆ ಹೋಗಬೇಕಾಗಿತ್ತು. ಮಂಗಳೂರು ಘಟನೆ ನಡೆದು ಹಲವು ದಿನಗಳಾಗಿವೆ, ಸಿಡಿ ತಯಾರಿಸಲು ಇಷ್ಟು ದಿನ ಬೇಕಾಗಿತ್ತಾ, ಘಟನೆ ನಡೆದ ತಕ್ಷಣವೇ ಸಿಡಿ ಬಿಡುಗಡೆ ಮಾಡಬಹುದಿತ್ತಲ್ಲಾ’ ಎಂದು ಪ್ರಶ್ನಿಸಿದರು.