ಕೆಲ ದಿನಗಳ ಹಿಂದೆ ವಿಧಾನಸೌಧ, ರಾಜಭವನ, ಹೈಕೋರ್ಟ್ ಸುತ್ತಮುತ್ತಲ ಸೂಕ್ಷ್ಮ ಪ್ರದೇಶಗಳಲ್ಲೇ ರಕ್ತಚಂದನದ ಮರಗಳು ಕಳವಾಗಿದ್ದವು. ಈ ಪ್ರಕರಣ
ಗಳ ಬೆನ್ನುಹತ್ತಿದ ಕೇಂದ್ರ ವಿಭಾಗದ ಪೊಲೀಸರ ತಂಡ, ಕಬ್ಬನ್ಪಾರ್ಕ್ನಲ್ಲಿ ಕಾಲಿಗೆ ಗುಂಡು ಹೊಡೆದು ಆರು ಆರೋಪಿಗಳನ್ನು ಬಂಧಿಸಿತ್ತು. ಅವರ ವಿಚಾರಣೆ ನಡೆಸಿದಾಗ ಸೈಯದ್ ರಿಯಾಜ್ ಹಾಗೂ ಆತನ ಮಗ ಸೈಯದ್ ಷೇರ್ ಅಲಿಯ ಹೆಸರು ಹೊರಬಿದ್ದಿತ್ತು.