ಮುಖ್ಯವಾಗಿ ಸೇವಾ ಜ್ಯೇಷ್ಠತೆಯ ಪಟ್ಟಿಯನ್ನು ಪರಿಗಣಿಸಿಯೇ ಬಡ್ತಿ ನೀಡಬೇಕು ಎಂದು ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಹಾಗೂ ಇತ್ತೀಚಿನ ಎಂ.ನಾಗರಾಜ್ ಪ್ರಕರಣ ಒಳಗೊಂಡಂತೆ ವಿವಿಧ ಪ್ರಕರಣಗಳ ತೀರ್ಪುಗಳು ಹೇಳಿವೆ. ಆದರೆ, ಬಡ್ತಿಯಲ್ಲಿ ಮೀಸಲಾತಿ ನೀಡುವ ವಿವಿಧ ಕಾಯ್ದೆಗಳು ಇದನ್ನು ಕಡೆಗಣಿಸಿವೆ ಎಂದು ಅವರು ತಿಳಿಸಿದರು.