ಇಲ್ಲಿನ ಶಾರದಾ ಮಠದ ಯಾಗಶಾಲೆಯಲ್ಲಿ ಶತ್ರು ನಾಶ ಮತ್ತು ಆರೋಗ್ಯ ವೃದ್ಧಿಗಾಗಿ ನಡೆಸುತ್ತಿದ್ದ ಪ್ರತ್ಯಂಗಿರ ಹೋಮದ ಪೂರ್ಣಾಹುತಿಯಲ್ಲಿ ಶುಕ್ರವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಶುಕ್ರವಾರ ಪಾಲ್ಗೊಂಡರು. ನಂತರ, ನರಸಿಂಹವನದ ಗುರುಭವನದಲ್ಲಿ ಭಾರತೀತೀರ್ಥ ಸ್ವಾಮೀಜಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.