ಸುದ್ದಿಗಾರರೊಂದಿಗೆ ಮಾತನಾಡಿ, ‘ಇಂದಿನ ಎಲ್ಲಾಬೆಳವಣಿಗೆಗಳಿಗೆ ದೋಸ್ತಿ ಸರ್ಕಾರದ ನಾಯಕರೇ ಕಾರಣರಾಗಿದ್ದಾರೆ. ಒಂದು ವರ್ಷದಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯದೇ ಸರ್ಕಾರ ನಿಷ್ಕ್ರಿಯವಾಗಿದೆ. ಕಿತ್ತಾಟದಲ್ಲೇ ಕಾಲಕಳೆದಿದ್ದಾರೆ. ಸಚಿವ ರೇವಣ್ಣ ಅವರ ಸರ್ವಾಧಿಕಾರಿಧೋರಣೆಯೇ ಈ ಎಲ್ಲಾ ಅವ್ಯವಸ್ಥೆಗಳಿಗೆ ಕಾರಣವಾಗಿದೆ’ ಎಂದು ಅವರು ತಿಳಿಸಿದರು.