ಬೆಂಗಳೂರಿನಿಂದ ಸಕಲೇಶಪುರಕ್ಕೆ ಹೋಗುವುದಾಗಿ ಹೊರಟಿದ್ದ ಸಿದ್ದಾರ್ಥ, ಮಧ್ಯದಲ್ಲಿ ಮಾರ್ಗ ಬದಲಿಸಿ ಮಂಗಳೂರಿಗೆ ಬಂದಿದ್ದರು. ಪಂಪ್ ವೆಲ್ ಬಳಿ ಬಂದಾಗ ಉಳ್ಳಾಲ ಕಡೆಗೆ ಹೋಗುವಂತೆ ಚಾಲಕ ಬಸವರಾಜ್ ಪಾಟೀಲ್ ಅವರಿಗೆ ಸೂಚಿಸಿದ್ದಾರೆ. ನೇತ್ರಾವತಿ ಸೇತುವೆ ಬಳಿ ಬಂದಾಗ ಕಾರಿನಿಂದ ಇಳಿದಿದ್ದಾರೆ. ನಡೆದು ಬರುವುದಾಗಿ ಹೇಳಿ ಕಾರನ್ನು ಸೇತುವೆಯ ಮತ್ತೊಂದು ತುದಿಗೆ ಕಳಿಸಿದ್ದರು.
ಮೊಬೈಲ್ ನಲ್ಲಿ ಮಾತನಾಡುತ್ತಾ ಸೇತುವೆಯ ಒಂದು ತುದಿಯಿಂದ ಇನ್ನೊಂದು ತುದಿಗೆ ಹೋಗಿದ್ದಾರೆ. ವಾಪಸ್ ಬರುವುದಾಗಿ ಚಾಲಕನಿಗೆ ತಿಳಿಸಿ 'ಯು' ತಿರುವು ಪಡೆದು ಸೇತುವೆಯ ಇನ್ನೊಂದು ಬದಿಯಿಂದ ಮಂಗಳೂರಿನ ಕಡೆಗೆ ಬಂದಿದ್ದಾರೆ. ಆ ಬಳಿಕ ನಾಪತ್ತೆಯಾಗಿದ್ದಾರೆ ಎಂಬುದು ಈವರೆಗಿನ ತನಿಖೆಯಲ್ಲಿ ಗೊತ್ತಾಗಿದೆ.