ವೀರಶೈವ ಲಿಂಗಾಯತ ಸಮಾಜದ ಮುಖಂಡ ಶಾಮನೂರು ಶಿವಶಂಕರಪ್ಪ ಅವರಿಗೆ ಸ್ವಾಮೀಜಿ ಮೇಲೆ ಹೆಚ್ಚಿನ ಭಕ್ತಿ. 15 ವರ್ಷಗಳ ಹಿಂದೆಯೇ ಶಿವಕುಮಾರ ಸ್ವಾಮಿಗಳ ಕಂಚಿನ ಪ್ರತಿಮೆ ಪ್ರತಿಷ್ಠಾಪಿಸಲು ಅವರು ಸಿದ್ಧತೆ ಆರಂಭಿಸಿದ್ದರಂತೆ. ನ್ಯಾ. ಶಿವರಾಜ್ ಪಾಟೀಲ್, ಐಎಎಸ್ ಅಧಿಕಾರಿ ಮುದ್ದಪ್ಪ, ಮುಖಂಡರಾದ ವಿಶ್ವಾರಾಧ್ಯ, ವೀರಣ್ಣ, ರೇವಣಸಿದ್ದಯ್ಯ ಅವರನ್ನೊಳಗೊಂಡ ತಂಡ ಶಾಮನೂರು ಅವರಿಗೆ ಜತೆಯಾಯಿತು. ಸ್ವಾಮೀಜಿ ಅವರಷ್ಟೇ ಎತ್ತರವಿರುವ ಪ್ರತಿಮೆ ಪ್ರತಿಷ್ಠಾಪಿಸಲು ಅವರೆಲ್ಲಾ ನಿರ್ಧರಿಸಿದರು. ಕೊಲ್ಲಾಪುರದ ಶಿಲ್ಪಿಯೊಬ್ಬರಿಗೆ ₹ 18 ಲಕ್ಷ ಕೊಟ್ಟು ಪ್ರತಿಮೆಯನ್ನೂ ಮಾಡಿಸಿದರು.