‘ರೀಲರ್ಗಳು ಮೊದಲೇ ತಿಳಿಸಿದ್ದರೆ ಮಾರುಕಟ್ಟೆಗೆ ಗೂಡು ತರುತ್ತಿರಲಿಲ್ಲ. ಈಗ ವಾಪಸ್ ಒಯ್ಯಲು, ಹಾಗೆಯೇ ಇಡಲೂ ಆಗುವುದಿಲ್ಲ. ಹೆಚ್ಚು ಹೊತ್ತು ಕಳೆದಷ್ಟೂ ರೈತರಿಗೆ ನಷ್ಟ. ಸರ್ಕಾರ ರೀಲರ್ಗಳ ಜತೆ ಚರ್ಚಿಸಲಿ. ಅಲ್ಲಿಯವರೆಗೆ ಕೆಎಸ್ಎಂಬಿ ಹಾಗೂ ಕೆಎಸ್ಐಸಿ ಮೂಲಕ ಸರ್ಕಾರವೇ ಖರೀದಿಸಲಿ’ ಎಂದು ಒತ್ತಾಯಿಸಿದರು. ಮೂರ್ನಾಲ್ಕು ಗಂಟೆ ಕಾಲ ಪ್ರತಿಭಟನೆ ನಡೆಯಿತು. ಇದರಿಂದಾಗಿ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆ ಆಗಿತ್ತು.