ಬರೋಬ್ಬರಿ ಎರಡು ಗಂಟೆಗಳ ಕಾಲ ನಡೆದ ಸಂಗೀತ ಕಛೇರಿಯನ್ನು ಶ್ರೋತೃಗಳು ಆನಂದಿಸಿದರು. ಓಂ ತತ್ ಸತ್ ಶ್ರೀ ನಾರಾಯಣ ತು, ಪುರುಷೋತ್ತಮ ಗುರು ತು, ಸಿದ್ಧ ಬುದ್ಧ ತು, ಸ್ಕಂದ ವಿನಾಯಕ, ಸವಿತಾ ಪಾವಕ ತು... ಎಂಬ ಹಾಡನ್ನು ಹಾಡುತ್ತ ಒಂದು ಕ್ಷಣ ಅವರು ಗದ್ಗದಿರಾಗುತ್ತಿದ್ದಂತೆಯೇ ಸಭಾಂಗಣದಲ್ಲಿ ಮೌನ ನೆಲೆಸಿತ್ತು. ಮತ್ತೆ ಸಂಗೀತ ಧಾರೆಯನ್ನು ಮುಂದುವರಿಸುತ್ತ, ವಚನಗಳನ್ನು ಹಾಡಿ ಕೂಡಲಸಂಗಮನನ್ನು ನೆನೆದರು. ಜಗದೋದ್ಧಾರನಾ... ಎಂಬ ಕೃಷ್ಣನ ಹಾಡಿನ ಬೆನ್ನಿಗೇ ಸೂಫಿ ಸಂತರ ಹಾಡೊಂದನ್ನು ಕೈಗೆತ್ತಿಕೊಂಡರು.