ಈ ಪ್ರಕರಣದಲ್ಲಿ ಎಸ್ಐಟಿ, ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಬಿ.ಎಂ. ವಿಜಯಶಂಕರ್, ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿ ಎಲ್.ಸಿ. ನಾಗರಾಜ್ ಅವರನ್ನು ಬಂಧಿಸಿದೆ. ಐಎಂಎ ಪರ ವರದಿ ನೀಡಿದ ಆರೋಪ ಇಬ್ಬರೂ ಅಧಿಕಾರಿಗಳ ಮೇಲಿದೆ. ಇದಕ್ಕಾಗಿ ಕ್ರಮವಾಗಿ ₹ 1.5 ಕೋಟಿ ಮತ್ತು ₹ 4.5 ಕೋಟಿ ಲಂಚ ಪಡೆದಿದ್ದಾರೆ ಎಂದೂ ದೂರಲಾಗಿದೆ.ಈ ಮಧ್ಯೆ, ಸೋಮವಾರ ಸಂಜೆಯಿಂದಲೇ ವಿಜಯ ಶಂಕರ್ ಅವರ ಮನೆ ಹಾಗೂ ಕಚೇರಿಯನ್ನು ಶೋಧಿಸಲಾಗಿದೆ.