ಇಸ್ಲಾಮಿಕ್ ಸ್ಟೇಟ್ ಜತೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದಾರೆ ಎಂದು ಶಂಕಿಸಲಾಗಿದ್ದ ಕಾಸರಗೋಡಿನ ಇಬ್ಬರು, ಪಾಲ್ಘಾಟ್ನ ಒಬ್ಬ, ಕೊಲ್ಲಂ ಜಿಲ್ಲೆಯ ಕುಂಡರದ ಒಬ್ಬ ಸೇರಿದಂತೆ ಐವರು ಹಾಗೂ ಕೊಯಮತ್ತೂರಿನಲ್ಲಿ ನಾಲ್ವರನ್ನು ಎನ್ಐಎ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದೆ. ಬಂಧಿತ ರಿಯಾಜ್ ಅಬೂಬಕ್ಕರ್ ಹೊಸ ವರ್ಷದ ದಿನಾಚರಣೆಯಂದು ಕೊಚ್ಚಿಯ ಜನನಿಬಿಡ ಹಾಗೂ ವಿದೇಶಿ ಪ್ರವಾಸಿಗರು ಅತಿ ಹೆಚ್ಚು ಭೇಟಿ ನೀಡುವ ಪ್ರವಾಸಿ ತಾಣದಲ್ಲಿ ಆತ್ಮಾಹುತಿ ದಾಳಿ ನಡೆಸಲು ಸಂಚು ರೂಪಿಸಿದ್ದ ಎನ್ನಲಾಗಿದೆ. ಆದರೆ ಆತನ ಸಹಚರರು ಇದಕ್ಕೆ ಸಹಕರಿಸದ ಕಾರಣ ಅಂದಿನ ದಾಳಿ ಕೈಬಿಟ್ಟಿದ್ದ. ಬಳಿಕ ತಾನೇ ಆತ್ಮಾಹುತಿ ದಾಳಿ ನಡೆಸಲು ಬೇಕಾದ ಸ್ಫೋಟಕ ವಸ್ತು ಸಂಗ್ರಹ ಮಾಡುತ್ತಿದ್ದ ಬಗ್ಗೆ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.