<p><strong>ನವದೆಹಲಿ:</strong> ಶ್ರೀಲಂಕಾದಲ್ಲಿಈಸ್ಟರ್ ದಿನದಂದು ನಡೆದ ಸರಣಿ ಬಾಂಬ್ ಸ್ಫೋಟದ ಪ್ರಮುಖ ಸಂಚುಕೋರಝೈನೀ ಹಶೀಂ ಕೇರಳ ಮತ್ತು ತಮಿಳುನಾಡಿನಲ್ಲಿರುವ 12ಕ್ಕೂ ಹೆಚ್ಚು ಜನರಿಗೆ ಮೊಬೈಲ್ ಕರೆ ಮಾಡಿರುವ ಮಾಹಿತಿ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಲಭ್ಯವಾಗಿದೆ.</p>.<p><strong>ಇದನ್ನೂ ಓದಿ:<a href="https://www.prajavani.net/632672.html" target="_blank">ಕಾಸರಗೋಡಿನ ಇಬ್ಬರ ಮನೆಗೆ ಎನ್ಐಎ ದಾಳಿ</a></strong></p>.<p>ಝೈನೀ ಹಶೀಂ ಕರೆ ಮಾಡಿರುವ ಸಿಡಿಆರ್ (ಮೊಬೈಲ್ ಕರೆ ವಿವರ) ಮಾಹಿತಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಸಂಗ್ರಹಿಸಿದೆ.ಝೈನೀ ಹಶೀಂಭಾರತದಲ್ಲಿ ಮೂರು ತಿಂಗಳು ಕಳೆದು ನಂತರ ಶ್ರೀಲಂಕಾಕ್ಕೆ ತೆರಳಿದ್ದ. ಈ ವೇಳೆ ಶ್ರೀಲಂಕಾದಿಂದ ಕೇರಳ ಮತ್ತು ತಮಿಳುನಾಡಿನಲ್ಲಿರುವ ಹಲವರಿಗೆ ಕರೆ ಮಾಡಿರುವ ಮಾಹಿತಿ ರಾಷ್ಟ್ರೀಯ ತನಖಾ ಸಂಸ್ಥೆಗೆ ಲಭ್ಯವಾಗಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.ಈಸ್ಟರ್ ದಿನದಂದು ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ 250ಕ್ಕೂ ಹೆಚ್ಚು ಜನರ ಮೃತಪಟ್ಟಿದ್ದರು.</p>.<p><strong>ಇದನ್ನೂ ಓದಿ:<a href="https://www.prajavani.net/stories/national/nia-today-carried-out-searches-632582.html" target="_blank">ಶ್ರೀಲಂಕಾದಲ್ಲಿ ಉಗ್ರ ಕೃತ್ಯ: ತನಿಖೆಯ ಜಾಡು ಹಿಡಿದು ಕಾಸರಗೋಡು ತಲುಪಿದ ಎನ್ಐಎ</a></strong></p>.<p>ರಾಷ್ಟ್ರೀಯ ತನಿಖಾ ಸಂಸ್ಥೆಯುಝೈನೀ ಹಶೀಂ ಜೊತೆ ಸಂಪರ್ಕ ಹೊಂದಿದ್ದ ಮೂವರನ್ನು ಕೇರಳದಲ್ಲಿ ಸೋಮವಾರ ಬಂಧಿಸಲಾಗಿದೆ. ಬಂಧಿತರುಐಎಸ್ ಉಗ್ರರ ಜತೆ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಶ್ರೀಲಂಕಾದಲ್ಲಿಈಸ್ಟರ್ ದಿನದಂದು ನಡೆದ ಸರಣಿ ಬಾಂಬ್ ಸ್ಫೋಟದ ಪ್ರಮುಖ ಸಂಚುಕೋರಝೈನೀ ಹಶೀಂ ಕೇರಳ ಮತ್ತು ತಮಿಳುನಾಡಿನಲ್ಲಿರುವ 12ಕ್ಕೂ ಹೆಚ್ಚು ಜನರಿಗೆ ಮೊಬೈಲ್ ಕರೆ ಮಾಡಿರುವ ಮಾಹಿತಿ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಲಭ್ಯವಾಗಿದೆ.</p>.<p><strong>ಇದನ್ನೂ ಓದಿ:<a href="https://www.prajavani.net/632672.html" target="_blank">ಕಾಸರಗೋಡಿನ ಇಬ್ಬರ ಮನೆಗೆ ಎನ್ಐಎ ದಾಳಿ</a></strong></p>.<p>ಝೈನೀ ಹಶೀಂ ಕರೆ ಮಾಡಿರುವ ಸಿಡಿಆರ್ (ಮೊಬೈಲ್ ಕರೆ ವಿವರ) ಮಾಹಿತಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಸಂಗ್ರಹಿಸಿದೆ.ಝೈನೀ ಹಶೀಂಭಾರತದಲ್ಲಿ ಮೂರು ತಿಂಗಳು ಕಳೆದು ನಂತರ ಶ್ರೀಲಂಕಾಕ್ಕೆ ತೆರಳಿದ್ದ. ಈ ವೇಳೆ ಶ್ರೀಲಂಕಾದಿಂದ ಕೇರಳ ಮತ್ತು ತಮಿಳುನಾಡಿನಲ್ಲಿರುವ ಹಲವರಿಗೆ ಕರೆ ಮಾಡಿರುವ ಮಾಹಿತಿ ರಾಷ್ಟ್ರೀಯ ತನಖಾ ಸಂಸ್ಥೆಗೆ ಲಭ್ಯವಾಗಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.ಈಸ್ಟರ್ ದಿನದಂದು ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ 250ಕ್ಕೂ ಹೆಚ್ಚು ಜನರ ಮೃತಪಟ್ಟಿದ್ದರು.</p>.<p><strong>ಇದನ್ನೂ ಓದಿ:<a href="https://www.prajavani.net/stories/national/nia-today-carried-out-searches-632582.html" target="_blank">ಶ್ರೀಲಂಕಾದಲ್ಲಿ ಉಗ್ರ ಕೃತ್ಯ: ತನಿಖೆಯ ಜಾಡು ಹಿಡಿದು ಕಾಸರಗೋಡು ತಲುಪಿದ ಎನ್ಐಎ</a></strong></p>.<p>ರಾಷ್ಟ್ರೀಯ ತನಿಖಾ ಸಂಸ್ಥೆಯುಝೈನೀ ಹಶೀಂ ಜೊತೆ ಸಂಪರ್ಕ ಹೊಂದಿದ್ದ ಮೂವರನ್ನು ಕೇರಳದಲ್ಲಿ ಸೋಮವಾರ ಬಂಧಿಸಲಾಗಿದೆ. ಬಂಧಿತರುಐಎಸ್ ಉಗ್ರರ ಜತೆ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>