ಹಾ.ಮಾ.ನಾ ಪ್ರತಿಷ್ಠಾನ ಆಯೋಜಿಸಿದ್ದ ಉಪನ್ಯಾಸದಲ್ಲಿ ಮಾತನಾಡಿದ ಅವರು, ‘ಭಾಷಾ ವಿಷಯದಲ್ಲಿ ಏನನ್ನೂ ಮಾಡದಂತಹ ಸನ್ನಿವೇಶ ನಿರ್ಮಾಣವಾಗಿದೆ. ಮೊದಲು ರಾಜಕಾರಣಿಗಳಿಗೆ ಈ ವಿಷಯವನ್ನು ಮನದಟ್ಟು ಮಾಡಿಕೊಡಬೇಕಿದೆ. ನಾವು ಇಂಗ್ಲಿಷ್ ಬೇಡ ಅನ್ನಲ್ಲ. ನೀವೂ ಸಹ ಕನ್ನಡ ಬೇಡ ಎನ್ನಬಾರದು. ಈ ಮೂಲಕ ಭಾಷಾ ಮಾಧ್ಯಮ ಸಮಸ್ಯೆಗೊಂದು ಪರಿಹಾರ ಕಂಡುಕೊಳ್ಳೋಣ’ ಎಂದರು.