ವಿಶೇಷ ಜಾಗೃತ ದಳದಲ್ಲಿ ಪ್ರತಿ ಜಿಲ್ಲೆಯಲ್ಲಿ ಸರಾಸರಿ 30ರಿಂದ 40 ಮಂದಿ ಇರುತ್ತಾರೆ. ಈ ದಳಕ್ಕೆ ಬೇರೆ ಜಿಲ್ಲೆಗಳಿಂದಲೇ ಉಪನ್ಯಾಸಕರನ್ನು ಕರೆಸಿಕೊಳ್ಳಲಾಗಿರುತ್ತದೆ. ಊಟ, ವಸತಿ, ಪ್ರಯಾಣ ವೆಚ್ಚ ಸಹಿತ ಪ್ರತಿಯೊಬ್ಬರಿಗೂ ಕನಿಷ್ಠ ₹ 12 ಸಾವಿರದಿಂದ ₹ 15 ಸಾವಿರದಷ್ಟು ಖರ್ಚಾಗಿರುತ್ತದೆ. ಕೆಲವರಿಗೆ ₹ 20 ಸಾವಿರದಷ್ಟು ಖರ್ಚಾಗಿದ್ದೂ ಇದೆ. ತಾವು ಮಾಡಿದ ಖರ್ಚಿನ ಹಣವನ್ನು ನೀಡಲು ವಿಳಂಬ ಮಾಡುತ್ತಿರುವುದು ಏಕೆ ಎಂದು ಉಪನ್ಯಾಸಕರು ಪ್ರಶ್ನಿಸಿದ್ದಾರೆ.