ಹುಬ್ಬಳ್ಳಿ: ಜಿಂದಾಲ್ ಕಂಪನಿಯು ಇದುವರೆಗೆ ಎಸಗಿರುವ ಅಕ್ರಮ ಗಣಿಗಾರಿಕೆ, ಜಲ, ವಾಯು ಮಾಲಿನ್ಯ, ಎಂ.ಎಂ.ಎಲ್ ಕಂಪನಿಗೆ ಹಣ ನೀಡದೇ ಇರುವುದು ಹಾಗೂ ಭೂ ಹಗರಣದ ಕುರಿತು ಸ್ವತಂತ್ರ ಸಂಸ್ಥೆಯಿಂದ ಸಮಗ್ರ ತನಿಖೆಯಾಗಬೇಕು ಎಂದು ಸಿಟಿಜನ್ ಫಾರ್ ಡೆಮಾಕ್ರಿಸಿ(ಸಿಎಫ್ಡಿ) ಅಧ್ಯಕ್ಷ ಎಸ್.ಆರ್.ಹಿರೇಮಠ ಆಗ್ರಹಿಸಿದರು.