‘2002ರಲ್ಲಿ ನಾನು ಎಸ್ಸೆಸ್ಸೆಲ್ಸಿ ಫೇಲಾದೆನು. ನನಗೆ ಗಣಿತ ಕಬ್ಬಿಣದ ಕಡಲೆಯಾಗಿತ್ತು. ಆದರೆ, ಮನೆ ಹಾಗೂ ಬಳಗದವರು ಯಾರೂ ನಿಂದಿಸಲಿಲ್ಲ. ಹೀಗಾಗಿ, ಪೂರಕ ಪರೀಕ್ಷೆ ಬರೆದು ತೇರ್ಗಡೆಯಾದೆನು. ಅನಂತರ ಅಥಣಿಯಲ್ಲಿ ಕಲಾ ವಿಭಾಗದಲ್ಲಿ ಪಿಯು ಪೂರೈಸಿದೆ. ಕಲಾ ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ, ಎಲ್ಎಲ್ಬಿ ಪೂರೈಸಿದೆನು’ ಎಂದು ವಿನಾಯಕ ಕುರುಬರ ‘ಪ್ರಜಾವಾಣಿ’ಗೆ ತಿಳಿಸಿದರು.